ಬ್ರಾಹ್ಮಿ ಮಹಿಳಾ ಸಮಾಜ, ವೇಣೂರು

ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕು ವೇಣೂರಿನ ಬ್ರಾಹ್ಮೀ ಜೈನ ಮಹಿಳಾ ಸಂಘವು 201ರಲ್ಲಿ ಸ್ಥಾಪನೆಯಾಯಿತು. ಈ ಸಂಘದ ಸಂಸ್ಥಾಪಕರು ಪ್ರಸನ್ನ ಆರ್.ಹೆಗ್ಡೆ. ಬ್ರಾಹ್ಮೀ ಜೈನ ಮಹಿಳಾ ಸಂಘದ ಉದ್ಘಾಟನೆಯನ್ನು ಶ್ರೀ ಧರ್ಮಸ್ಥಳದಲ್ಲಿ ದಿನಾಂಕ: 04/10/2011ರಂದು  ಹೇಮಾವತಿ ವಿ. ಹೆಗ್ಗಡೆಯವರು ನೆರವೇರಿಸಿದರು. ಪದಾಧಿಕಾರಿಗಳ ಆಯ್ಕೆಯು 2011ರಲ್ಲಿ ಜೈನ್ ಮಿಲನಿನ ಅಧ್ಯಕ್ಷರಾದಂತಹ ನವೀನ್‌ಚಂದ್ ಬಲ್ಲಾಳ್ ಇವರ ಉಪಸ್ಥಿತಿಯಲ್ಲಿ ಶ್ರೀ ಬಾಹುಬಲಿ ಸಭಾಭವನದಲ್ಲಿ ನಡೆಯಿತು. 

ಬ್ರಾಹ್ಮೀ ಜೈನ ಮಹಿಳಾ ಸಂಘದ ಚಟುವಟಕೆಗಳು : 

* ವೇಣೂರಿನಲ್ಲಿ 2012ರಲ್ಲಿ ಜರುಗಿದ ಭ ಶ್ರೀ ಬಾಹುಬಲಿ ಸ್ವಾಮಿಯ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಎಲ್ಲಾ ಸಮಿತಿಗಳಲ್ಲೂ ಸಕ್ರಿಯವಾಗಿ ಬಾಗವಹಿಸಿ, ಮುನಿಗಳ ಸೇವೆಯಲ್ಲಿಯೂ ಪಾಲ್ಗೊಂಡಿರುತ್ತಾರೆ. 

* ವೇಣೂರಿನಲ್ಲಿ 2017ರಲ್ಲಿ ಪ್ರಪ್ರಥಮವಾಗಿ ಜರುಗಿದ 108 ಮುನಿಶ್ರೀ ಪ್ರಸಂಗ ಸಾಗರ ಮುನಿಮಹಾರಾಜರ ಚಾತುರ್ಮಾಸ ಸಂದರ್ಭದಲ್ಲಿ ಪ್ರತಿನಿತ್ಯ ಆಹಾರಚರ್ಯೆ ಮಂಗಲ ಪ್ರವಚನದಲ್ಲಿ ಸಕ್ರಿಯವಾಗಿ ಭಾಗವಹಿಸಿರುತ್ತಾರೆ. 

* ಪ್ರತೀ ವರ್ಷ ನಡೆಯುವ ದಶಲಕ್ಷಣ ಪರ್ವ, ಅಷ್ಟಾವಿಧಾರ್ಚನ ಪೂಜೆ, ನವರಾತ್ರಿ ಪೂಜೆ, ಸೋಣ ಶುಕ್ರವಾರ ಪೂಜಾ ಕಾರ್ಯಕ್ರಮಗಳಲ್ಲಿ ಬ್ರಾಹ್ಮೀ ಜೈನ ಮಹಿಳಾ ಸಂಘವು ಭಾಗವಹಿಸಿ ಯಶಸ್ವಿಯಾಗುವಲ್ಲಿ ಸಹಕರಿಸಿರುತ್ತಾರೆ. 

* ಪ್ರತೀ ವರ್ಷ ಮಾರ್ಚ್ 8 ರಂದು ಮಹಿಳಾ ದಿನಾಚರಣೆಯನ್ನು ಆಚರಿಸುತ್ತಿದ್ದು, ಮಹಿಳೆಯರಿಗೆ ಸಂಭಂದಿಸಿದ ಮಾಹಿತಿ ಕಾರ್ಯಕ್ರಮ ಮತ್ತು ವಿವಿಧ ಆಟೋಟ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗುತ್ತದೆ. 

* 2011ರಲ್ಲಿ ಹೊಂಬುಜದ ಸ್ವಾಮಿಗಳ ಪಟ್ಟಾಭಿಷೇಕಕ್ಕೆ ಮತ್ತು ವರಾಂಗದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದಲ್ಲಿಯೂ ಭಾಗವಹಿಸಿರುತ್ತಾರೆ. 

* 2011ರಿಂದ 2024ರವರೆಗೆ ವೇಣೂರಿನ ಬಾಹುಬಲಿ ಬೆಟ್ಟದ ಸ್ವಚ್ಛತಾ ಕಾರ್ಯಕ್ರಮದಲ್ಲಿ, ಬಸದಿಗಳ ಸ್ವಚ್ಛತಾ ಕಾರ್ಯಕ್ರಮದಲ್ಲೂ ಸಕ್ರಿಯವಾಗಿ ಭಾಗವಹಿಸಿರುತ್ತಾರೆ. 

* 2019ರಲ್ಲಿ ಧರ್ಮಸ್ಥಳದಲ್ಲಿ ನಡೆದ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಬ್ರಾಹ್ಮೀ ಜೈನ ಮಹಿಳಾ ಸಂಘದ ಸದಸ್ಯರು ಸ್ವಯಂ ಸೇವಕರಾಗಿ ಭಾಗವಹಿಸಿರುತ್ತಾರೆ. 

* ಕಾರ್ಕಳ, ಬಂಟ್ವಾಳ ಮತ್ತು ರೆಂಜಾಳ ಇನ್ನೂ ಹಲವಾರು ಕಡೆ ಜರುಗಿದ ಜೈನ್ ಮಿಲನ್ ರಾಜ್ಯಮಟ್ಟದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಸದಸ್ಯರು ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. 

* ನಾರಾವಿ ಕೆಸರ್‌ದ ಗೊಬ್ಬು ಮತ್ತು ಮೂಡುಬಿದಿರೆ ಎಕ್ಸಲೆಂಟ್ ಕಾಲೇಜಿನಲ್ಲಿ ಜರುಗಿದ ಆಟೋಟ ಸ್ಪರ್ಧೆಯಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಪಡೆದಿರುತ್ತಾರೆ. 

* ಪ್ರತಿವರ್ಷವೂ ಜರುಗುವ ಜಿನಭಜನ ಕಾರ್ಯಕ್ರಮದಲ್ಲಿ ಭಾಗವಹಿಸಿರುತ್ತಾರೆ. ಈ ವರ್ಷಋ ಜರುಗಿದ ಜಿನಭಜನೆ ಸ್ಪರ್ಧೆಯಲ್ಲಿ ಬ್ರಾಹ್ಮೀ ಜೈನ ಮಹಿಳಾ ಸಂಘದ ಸದಸ್ಯರ ತಂಡವು ಫೈನಲ್‌ವರೆಗೆ ಆಯ್ಕೆಯಾಗಿರುತ್ತಾರೆ. 

* ಮೂಡುಬಿದಿರೆ ಹಿರೇ ಅಮ್ಮನವರ ಬಸದಿಯ ಪಂಚಕಲ್ಯಾಣದ ಸಂದರ್ಭದಲ್ಲೂ ಭಾಗವಹಿಸಿರುತ್ತಾರೆ. 

* ನಾರಾವಿಯಲ್ಲಿ ಇತ್ತೀಚೆಗೆ ಜರುಗಿದ ಧಾಮಸಂಪ್ರೋಕ್ಷಣಾ ಕಾರ್ಯಕ್ರಮದಲ್ಲಿ ಸ್ವಯಂಸೇವಕರಾಗಿ ಭಾಗವಹಿಸಿರುತ್ತಾರೆ. 

22/02/2024 ರಿಂದ ಮಾರ್ಚ್ 1ರ ವರೆಗೆ ಜರುಗಿದ ಮಹಾಮಸ್ತಕಾಭಿಷೇಕದಲ್ಲಿ ಮುಂಚಿತವಾಗಿ ಶ್ರಮದಾನದಲ್ಲಿಯೂ ಭಾಗವಹಿಸುವ ಜೊತೆಗೆ ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ವಿವಿಧ ಸಮಿತಿಗಳಲ್ಲಿ ಸ್ವಯಂಸೇವಕರಾಗಿ ಕರ್ತವ್ಯವನ್ನು ನಿರ್ವಹಿಸಿರುತ್ತಾರೆ. 

ಈ ಕೆಳಗಿನ ವಿಷಯಗಳಿಗೆ ಮೊತ್ತವನ್ನು ಕೊಡಲಾಗಿರುತ್ತದೆ : 

* ಇತ್ತೀಚೆಗೆ ವೇಣೂರಿನಲ್ಲಿ ಜರುಗಿದ ಅಕ್ಕಂಗಳ ಬಸದಿ ಧಾಮಸಂಪ್ರೋಕ್ಷಣಾ ಕಾರ್ಯಕ್ರಮದ ಸಂದರ್ಭದಲ್ಲಿ ಒಂದು ದಿನದ ಸೇವೆಯನ್ನು ಬ್ರಾಹ್ಮೀ ಜೈನ ಮಹಿಳಾ ಸಂಘದ ಸದಸ್ಯರು ವಹಿಸಿಕೊಂಡಿರುತ್ತಾರೆ. ಈ ಕಾರ್ಯಕ್ರಮಕ್ಕೆ 25 ಸಾವಿರ ರೂ. ಹಣವನ್ನು ಕೊಡಲಾಗಿದೆ. 

* ವೇಣೂರಿನಲ್ಲಿ ಪ್ರತಿವರ್ಷ ಜರುಗುವ ಭ ಶ್ರೀ ಬಾಹುಬಲಿ ಸ್ವಾಮಿಯ ರಥೋತ್ಸವಕ್ಕೆ 7 ಸಾವಿರ ರೂ.ಗಳನ್ನು ಬ್ರಾಹ್ಮೀ ಜೈನ ಮಹಿಳಾ ಸಂಘದ ವತಿಯಿಂದ ಕೊಡಲಾಗುತ್ತದೆ. 

* ವೇಣೂರಿನಲ್ಲಿ ಯುವಜನ ಸಂಘದ ವತಿಯಿಂದ ಪ್ರತಿವರ್ಷ ಜರುಗುವ ಕ್ರೀಡೋತ್ಸವಕ್ಕೆ 2 ಸಾವಿರ ರೂ.ಗಳನ್ನು ಕೊಡಲಾಗುತ್ತದೆ. ಪ್ರತಿವರ್ಷ ಜರುಗುವ ಧಾರ್ಮಿಕ ಶಿಬಿರಕ್ಕೆ ೩ ಸಾವಿರ ರೂ. ಅನ್ನು ಕೊಡಲಾಗುತ್ತದೆ. 

* ವೇಣೂರಿನಲ್ಲಿ ನವೆಂಬರ್ ತಿಂಗಳಲ್ಲಿ ಜರುಗಿದ ವಲಯ ಮಟ್ಟದ ಜಿನಭಜನಾ ಸ್ಪರ್ಧಾ ಕಾರ್ಯಕ್ರಮಕ್ಕೆ ರೂ.10,005/- ಗಳನ್ನು ನೀಡಲಾಗಿದೆ. ಮಹಾಮಸ್ತಕಾಭಿಷೇಕ ಸಂದರ್ಭದಲ್ಲಿ ಬ್ರಾಹ್ಮೀ ಜೈನ ಮಹಿಳಾ ಸಂಘಕ್ಕೆ ಹೊಸ ಸದಸ್ಯರ ಸೇರ್ಪಡೆಯಾಗಿದ್ದು, ಪ್ರಸ್ತುತ 115 ಸದಸ್ಯರಿರುತ್ತಾರೆ. 

ವಂದನೆಗಳೊಂದಿಗೆ,

ಸರೋಜ ಜಿ. ಜೈನ್, ಅಧ್ಯಕ್ಷರು ಆಶಾಲತಾ ಜೈನ್, ಕಾರ್ಯದರ್ಶಿ. 

 

 ಬ್ರಾಹ್ಮಿ ಮಹಿಳಾ ಸಮಾಜ ವೇಣೂರು – 9945251577

 

Sl No. ID No. Name Designation Contact Number Photo