ಶ್ರೀ ಪದ್ಮಾಂಬ ಮಹಿಳಾ ಸಮಾಜ, ಕೆಳಂಗಡಿ ಕಳಸ

ಪೂಜ್ಯ ಖಾವಂದರ ಹಾಗೂ ಮಾತೃಶ್ರೀ ಅಮ್ಮನವರ ಕೃಪಾಶೀರ್ವಾದವನ್ನು ಬೇಡುತ್ತಾ ನಮ್ಮ ಪದ್ಮಾಂಬ ಮಹಿಳಾ ಮಂಡಳಿಯ ವರದಿಯನ್ನು ಮಂಡಿಸುತ್ತೇವೆ. 

204/04/2012ರಲ್ಲಿ ನಾವು ಮಹಿಳೆಯರೆಲ್ಲ ಒಟ್ಟು ಸೇರಿ ಪದ್ಮಾಂಬ ಮಹಿಳಾ ಮಂಡಳಿ ಎಂಬ ನಾಮಕರಣ ಮಾಡಿದೆವು. ಇದರಲ್ಲಿ ಸುನಿತಾ ಶ್ರೇಣಿಕ್ ಅಧ್ಯಕ್ಷರಾಗಿ, ಮತ್ತು ಸುಷ್ಮಾ ರಾಜೇಂದ್ರರವರು ಕಾರ್ಯದರ್ಶಿಯಾಗಿ ಆಯ್ಕೆಯಾಗಿದ್ದಾರೆ. ತಿಂಗಳ ಒಂದನೇ ತಾರೀಕು ನಮ್ಮ ಕಳಸದ ಚಂದ್ರನಾಥ ಸ್ವಾಮಿ ಬಸದಿಯಲ್ಲಿ ಪ್ರತಿ ತಿಂಗಳು ಪೂಜೆ ಇರುವುದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳೆಯರು ಭಾಗವಹಿಸಿ ಪೂಜೆಯಲ್ಲಿ ಪಾಲ್ಗೊಂಡು ಮಧ್ಯಾಹ್ನದ ನಂತರ ಊಟ ಮುಗಿಸಿಕೊಂಡು ನಮ್ಮ ಪದ್ಮಾಂಬ ಮಹಿಳಾ ಮಂಡಳಿಯ ಮೀಟಿಂಗ್ ನಡೆಸುತ್ತೇವೆ. ಪ್ರತಿ ತಿಂಗಳು ತಪ್ಪದೇ ನಾವು ತಿಂಗಳ ಮೀಟಿಂಗ್ ನಡೆಸುತ್ತೇವೆ. ನಂತರ 2014ರ ಮತ್ತು 2022ರ ಇಸವಿಯಲ್ಲಿ ಶ್ರೀ 108 ಪಾವನ ಕೀರ್ತಿ ಮುನಿ ಮಹಾರಾಜರ ಮತ್ತು ಶ್ರೀ 108 ಪ್ರಸಂಗ ಸಾಗರ್ ಮುನಿ ಮಹಾರಾಜರ ಚಾತುರ್ಮಾಸದ ಸಮಯದಲ್ಲಿ ನಾವೆಲ್ಲ ಮಹಿಳೆಯರು 20 ಕಿಲೋಮೀಟರ್ ದೂರದಿಂದ ಬೆಳಗ್ಗೆ 5 ಗಂಟೆಗೆ ಸರಿಯಾಗಿ ಅಲ್ಲಿ ಹೋಗಿ ಆಹಾರ ಚೌಕದ್ಲಲಿ ಭಾಗವಹಿಸಿದ್ದೇವೆ. ನಮ್ಮ ಮಂಡಳಿಯು ಶ್ರವಣಬೆಳಗೊಳ ಕಾರ್ಕಳ ವೇಣೂರು ಬಾಹುಬಲಿ ಸ್ವಾಮಿಯ ಮಸ್ತಕಾಭಿಷೇಕದಲ್ಲಿ  ಸ್ವಯಂಸೇವಕರಾಗಿ ಸೇವೆ ಸಲ್ಲಿಸಿದ್ದೇವೆ ಮತ್ತು ಧರ್ಮಸ್ಥಳಕ್ಕೆ ಬಂದು ಅವಹೇಳನ ಕಾರ್ಯ ಪ್ರಕರಣದಲ್ಲಿ ನಮ್ಮ ಮಂಡಳಿಯು ಮಂಚೂಣಿಯಲ್ಲಿತ್ತು ಮೂಡಿಗೆರೆ ತಾಲೂಕಿನ ಹಂತೂರು ಗ್ರಾಮದಲ್ಲಿ ನಡೆದ ಬಸದಿಯ ನಿರ್ಮಾಣದ ಒಂದು ತಿಂಗಳ ಕೆಲಸದಲ್ಲಿ ಸರ್ವೋದಯ ತೀರ್ಥ ಸಮಿತಿಯವರ ಜೊತೆಗೂಡಿ ನಮ್ಮ ಮಂಡಳಿಯು ಸ್ವಚ್ಛತಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದೆವು.ಹಾಗೂ ಪಂಚ ಕಲ್ಯಾಣದ ಸಮಯದಲ್ಲಿ ಮೂರು ದಿನಗಳ ಕಾಲ ಸತತವಾಗಿ  ಸೇವೆ ಸಲ್ಲಿಸಿದೆವು. ಪಂಚಕಲ್ಯಾಣದ ಮೊದಲನೇ ದಿನದಂದು ದೃಶ್ಯ ರೂಪಕ ಪಾರ್ಶ್ವನಾಥ ಸ್ವಾಮಿಯ ಜೀವನ ಚರಿತ್ರೆ ಎಂಬ ದೃಶ್ಯವನ್ನು ಮಾಡಿ ತೋರಿಸಿದ್ದೇವೆ. ಹಿಣ್ಣೆಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಗಾದೆ ಮಾತಿನಂತೆ ನಾವು ಮಹಿಳೆಯರು ನಮ್ಮ ಮನೆಯ ಜವಾಬ್ದಾರಿಯನ್ನು ಯಾವ ರೀತಿಯಾಗಿ ನಿಭಾಯಿಸಬಹುದು ಮತ್ತು ನಮ್ಮ ಮಕ್ಕಳ ಲಾಲನೆ ಪಾಲನೆಯಲ್ಲಿ ನಮ್ಮ ಪಾತ್ರ ಏನು ಮತ್ತು ನಮ್ಮ ಮಕ್ಕಳನ್ನು ಧರ್ಮದ ದಾರಿಯಲ್ಲಿ ಹೇಗೆ ನಡೆಸಬೇಕು ಎಂಬುದರ ಬಗ್ಗೆ ಚರ್ಚೆ ಮಾಡುತ್ತೇವೆ. ನಮ್ಮ ಮಂಡಳಿಗೆ ಚಾತುರ್ಮಾಸದ ಸಮಯದಲ್ಲಿ, ಮಸ್ತಕಾಭಿಷೇಕದ ಸಮಯದಲ್ಲಿ ಮತ್ತು ಹಂತೂರಿನ ಪಂಚಕಲ್ಯಾಣದ ಸಮಯದಲ್ಲಿ ಪ್ರಶಸ್ತಿಯನ್ನು ಕೊಟ್ಟು ಗೌರವಿಸಿದ್ದಾರೆ.

 

ಶ್ರೀ ಪದ್ಮಾಂಬ ಮಹಿಳಾ ಸಮಾಜ ಕೆಳಂಗಡಿ ಕಳಸ- 8660363300

 

Sl No. ID No. Name Designation Contact Number Photo