ದೇಶ ಭಕ್ತಿ ಜಿನೇಶ್ವರ ಶಕ್ತಿ - ಜ್ವಾಲಮಾಲಿನಿ ಅಧ್ಯಕ್ಷಿಣಿ ಶ್ರೀಮತಿ ಪದ್ಮಾವತಿ ಸಂಕಲ್ಪ

ದೇಶ ಭಕ್ತಿ ಜಿನೇಶ್ವರ ಶಕ್ತಿ - ಜ್ವಾಲಮಾಲಿನಿ ಅಧ್ಯಕ್ಷಿಣಿ ಶ್ರೀಮತಿ ಪದ್ಮಾವತಿ ಸಂಕಲ್ಪ

prayer thumb
ಹೂವಿನಹಡಗಲಿ ಮೇ 11 ಭಾರತದ ಗಡಿ ಕಾಶ್ಮೀರದ ಪಹಾಲ್ಗಮ ನಲ್ಲಿ ಅಮಾಯಕರು ಪಾಕಿಸ್ತಾನದ ಉಗ್ರರಿಂದ ಹತ್ಯೆಗೀಡಾದುದು ಅತ್ಯಂತ ದುಃಖಕರ ಸಂಗತಿಯಾಗಿದೆ. ಭಾರತ ಸರಕಾರ ರಕ್ಷಣಾ ಸೈನಿಕರು ಸುರಕ್ಷಾ ಕ್ರಮಗಳನ್ನು ಬಿಗಿಗೊಳಿಸಿ ಪಾಕಿಸ್ತಾನದ ಯುದ್ಧ ಸಂಘರ್ಷ ಪ್ರಾರಂಭಗೊಂಡಿದ್ದು ಆಪರೇಷನ್ ಸಿಂಧೂರ ಕಾರ್ಯಚರಣೆ ಅಡಿಯಲ್ಲಿ ಸಾವಿರಾರು ಸೈನಿಕರು ಜೀವಪಣಕ್ಕಿಟ್ಟು ಹೋರಾಟ ನೆಡೆಸುತ್ತ ಶತ್ರು ದೇಶಕ್ಕೆ ಪಾಠ ಕಲಿಸುತ್ತಿದ್ದಾರೆ. ಭಾರತದ ಸೈನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗದಂತೆ ಹೂವಿನಹಡಗಲಿ ಶ್ರೀ ಪಾರ್ಶ್ಶ್ವನಾಥ ಸ್ವಾಮಿ ದಿಗಂಬರ ಜೈನ ಬಸದಿಯಲ್ಲಿ ಶ್ರೀ ಪಾರ್ಶ್ಶ್ವನಾಥ ಸ್ವಾಮಿ ಮತ್ತು ಯಕ್ಷಣಿ ದೇವಿ ಪದ್ಮಾವತಿ ಅಮ್ಮನವರಲ್ಲಿ ಹೂ ಹಡಗಲಿ ಪಟ್ಟಣದ ಜೈನ ಸಮುದಾಯದ ಶ್ರಾವಕ - ಶ್ರಾವಿಕಿಯರು ಭಗವಂತನಲ್ಲಿ ಭಾರತ ದೇಶ ಮತ್ತು ಭಾರತೀಯ ಸೈನಿಕರ ಮನೋಬಲ, ಆತ್ಮಸ್ತರ್ಯ ವನ್ನು ಹೆಚ್ಚಿಸಲು ಭಗವಂತ ನಲ್ಲಿ ಪ್ರಾಥಿ೯ಸಿ ಸಂಕಲ್ಪ ಮಾಡಿಕೊಂಡರು,ಸಮಾರಂಭ ದಲ್ಲಿ ಜ್ವಾಲಮಾಲಿನಿ ಮಹಿಳಾ ಸಂಘದ ಅಧ್ಯಕ್ಷರಾದ ಶ್ರೀಮತಿ ಪದ್ಮಾವತಿ ಎಮ್ ಡಿ ರವರು ದೇಶ ಭಕ್ತಿಯೇ ಜಿನೇಶ್ವರ ಶಕ್ತಿ ಎಂದರು. ಶ್ರಾವಿಕಿಯರು ಸೈನಿಕರ ರಕ್ಷಣೆಗೆ ಕುಂಕುಮ ಪೂಜಾ ಮಹೋತ್ಸವ ನೆರೆವೇರಿಸಿದರು ಹಾಗೂ ಭಾರತ ಮಾತೆಗೆ ಜಯವಾಗಲಿ ಘೋಷಣೆ ಜಿನಬಸದಿ ತುಂಬಾ ಮೊಳಗಿತು.